ನಾನು 9 ತಿಂಗಳ ಮಗುವಾಗಿದ್ದಾಗ, 1977ರಲ್ಲಿ ಅಮ್ಮ ನನ್ನನ್ನು ಶ್ರೀಶೈಲಕ್ಕೆ ಕರೆದುಕೊಂಡು ಹೋಗಿದ್ದರು.
ತಲೆಕೂದಲು ತೆಗೆಸುವುದಕ್ಕೆ (ಜವಳ ತೆಗೆಸುವುದಕ್ಕೆ) ಹೋಗಿದ್ದರು.
ಆ ಕಾಲದಲ್ಲಿ ಈಗಿನ ಹಾಗೆ ಬಸ್ಸುಗಳು ದೇವಸ್ಥಾನದ ಬಳಿಗೆ ಹೋಗುತ್ತಿರಲಿಲ್ಲ. ಶ್ರೀಶೈಲದಲ್ಲಿ ಕಳ್ಳರ ಕಾಟವೂ ತುಂಬಾ ಇತ್ತು. ನಮ್ಮ ಅಮ್ಮನ ಬಳಿ ತುಂಬಾ ಬಂಗಾರ ಇದ್ದ ಕಾರಣ, ಇಬ್ಬರು ಗನ್ಮ್ಯಾನ್ಗಳನ್ನು ಕೂಡ ಇಟ್ಟುಕೊಂಡಿದ್ದರು. ಅಣ್ಣ, ಅಪ್ಪ, ಸಂಬಂಧಿಕರು ಒಬ್ಬರು ಮತ್ತು ಅಮ್ಮ — ಎಲ್ಲರೂ ಜೊತೆಯಲ್ಲಿದ್ದರು.
ಅಮ್ಮ ನನ್ನನ್ನು ಕೈಯಲ್ಲಿ ಎತ್ತಿಕೊಂಡೇ ಸುಮಾರು ನಾಲ್ಕು–ಐದು ಕಿಲೋಮೀಟರ್ ನಡೆದುಕೊಂಡು ದೇವಸ್ಥಾನ ತಲುಪಿದರು. ಯಾರೊಬ್ಬರೂ ನನ್ನನ್ನು ಎತ್ತಿಕೊಳ್ಳಲಿಲ್ಲ; ಅಮ್ಮನೇ ಅಷ್ಟೊಂದು ದೂರ ನನ್ನನ್ನು ಎತ್ತಿಕೊಂಡು ಬಂದಿದ್ದರು.
ಅಮ್ಮನ ಪ್ರೀತಿ ಅಪಾರ. ❤️
12/7/2026 ರಂದು ನಾವು ರಾತ್ರಿ ಶ್ರೀಶೈಲ ತಲುಪಿದೆವು.
ಅಕ್ಕಮಹಾದೇವಿ ಚೈತನ್ಯ ಪೀಠದ ರೂಂನಲ್ಲಿ ಇದ್ದೆವು.
ಬೆಳಿಗ್ಗೆ ಎದ್ದು ಮಲ್ಲಿಕಾರ್ಜುನರ ದರ್ಶನ ಪಡೆದು, ನಂತರ ಅಕ್ಕಮಹಾದೇವಿಯವರ ತಪೋವನದ ಗುಹೆಗೆ ಹೋದೆವು.
ನಮ್ಮ ಅಮ್ಮ, ಅಕ್ಕ, ಅಣ್ಣ, ತಮ್ಮ, ತಂಗಿ, ನಾನು, ನನ್ನ ಮಗ, ಮಗಳು — ಎಲ್ಲರೂ ಸೇರಿ ಒಟ್ಟು 13 ಜನರು ಶ್ರೀಶೈಲ ದರ್ಶನ ಮಾಡಿ ಬಂದೆವು.
ನಾನು ಮಗುವಾಗಿದ್ದಾಗ ಅಮ್ಮನ ಜೊತೆ ಶ್ರೀಶೈಲಕ್ಕೆ ಹೋಗಿದ್ದೆ. ಆ ಬಳಿಕ 48 ವರ್ಷಗಳು ಕಳೆದಿದ್ದವು. ಮತ್ತೆ ಅಮ್ಮನ ಜೊತೆ ಶ್ರೀಶೈಲಕ್ಕೆ ಹೋಗಬೇಕು ಎಂಬ ಆಸೆ ತುಂಬಾ ಇತ್ತು. ಅಕ್ಕಮಹಾದೇವಿಯವರ ತಪೋವನ ಗುಹೆಯನ್ನು ತೋರಿಸಬೇಕು ಎಂಬ ಆಸೆಯೂ ಇತ್ತು.
ಆ ಆಸೆ ಈಡೇರಿತು. ❤️